ವಾಸ್ತವ ಸತ್ಯ -ಸಮ್ಮೇಳನಗಳು,ಗೋಷ್ಟಿಗಳು
ಸಮ್ಮೇಳನಗಳು,ಗೋಷ್ಟಿಗಳು:
ಬಹುಬಗೆಯ ಪೆಸರಿಂದ ಸಮ್ಮೇಳನವು ನಡೆದು,ಸಮ್ಮೇಳನದಿ ವಿವಿಧ ಗೋಷ್ಟಿಗಳು ಬೆಸೆದು ಸಮ್ಮೇಳನದ ಯಶವಕಂಡೆ ನಾನಂದು:
ಸಮ್ಮೇಳನದಿ ಹಲವು ನಿರ್ಣಯವ ಮಾಡುವರು,ನಿರ್ಣಯವ ಬೆಂಬಿಡದೆ ಪಾಲಿಸುವರಾರು:
ನಾಡು ನುಡಿಗಳ ಬಗೆಗೆ ಕಾಳಜಿಯು ಇರಲಿ,ಸಮ್ಮೇಳನಕೆ ಮಾತ್ರ ಮಿತವಾಗದಿರಲಿ:
ಅನವರತ ನಾಡು ನುಡಿಗಳ ಬಗೆಗೆ ದುಡಿಯುತ್ತ, ಪೆಸರಗಳಿಸುವ ಮರುಳು ಇಲ್ಲದಿಹ ರಿಹರು:ಇಂತಿಪ್ಪ ಮಂದಿಗಳ ಗುರುತಿಸುವ ಮನವಿರಲಿ, ಸಮ್ಮೇಳನಗಳಲ್ಲಿ ಸ್ವಾರ್ಥ ಬರದಿರಲಿ:
✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,
Post a Comment